ನಾನ್ಯಾರು?
ಮಾನವ ಸಂಕುಲದ ಉಸಿರು,
ತನ್ನೆಲ್ಲವನ್ನೂ ಧಾರೆಯೆರೆದ ಸಂಗಾತಿ;
ಎಲ್ಲರನ್ನೂ ಸಮನಾಗಿ ಪೊರೆದು,
ಸಕಲ ಜೀವರಾಶಿಯ ಸಂತತಿ.
ಮರೀಚಿಕೆಯ ಬೆನ್ನೇರಿ ಹೋಗುವ,
ಮಾನವನ ಮುಂದಿದೆ ಅವನತಿ;
ಎಚ್ಚರಿಕೆ ಬೇಗನೆ ತೋರಬೇಕಿದೆ,
ತನ್ನವರ ಒಳಿತಿಗಾಗಿ ಪ್ರಗತಿ.
ಸ್ವಾರ್ಥದ ನೆಲೆಯ ಬಿಟ್ಟು,
ಬದುಕಬೇಕು ಅದೇ ನಮ್ಮ ಸಂಸ್ಕೃತಿ;
ವಿಚಾರಧಾರೆಗಳ ಮನನ ಮಾಡಿ,
ಬಾಳಬೇಕು ಆಗ ಸಿಗುವುದು ಸದ್ಗತಿ.
ವಿನಾಶಕ್ಕೆ ಮುನಿದು ನಿಂತರೆ,
ತಡೆಯಲಾರದು ನಮ್ಮೆಲ್ಲರ ದುರ್ಗತಿ;
ಜೀವಿಸೋಣ ಇನ್ನುಮುಂದೆ ಪೂರಕವಾಗಿ,
ಪರಸ್ಪರ ಸಹಬಾಳ್ವೆಯಿಂದ ದೊರೆಯುವುದು ಶಾಂತಿ.
ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲೇ,
ಎಲ್ಲರ ನೆಮ್ಮದಿಯ ಸಂಕ್ರಾಂತಿ;
ತೋರಬೇಡ ನಿನ್ನಯ ಬೇಡಿಕೆಗಳ,
ದುರಾಸೆಯ ಮನಸ್ಸಿನ ವಿಕೃತಿ.
ಪ್ರತಿಬಾರಿ ಬಾಳಬೇಕು,
ಮನುಷ್ಯ ಅಳವಡಿಸಿಕೊಂಡು ನೀತಿ;
ಸಕಲವೂ ಒಳ್ಳೆಯದಾಗಿ ನಾವು,
ಆಗುವೆವು ಬೇರೆಯವರ ಕಾಂತಿ.
ಸಾಧಕ-ಭಾದಕಗಳ ಅರಿವು,
ಮೂಡಿಸಿ ಪ್ರಹರಿಸಿ ಜಾಗೃತಿ;
ಮನಸ್ಸಿನ ಒಳ್ಳೆಯ ಮಾತನ್ನು ಕೇಳಿ,
ಉಂಟಾಗುವುದು ನಿಮಗೆ ಸುಕೃತಿ.
ತೊರೆದು ಬಾಳಿದರೆ,
ನಮಗೆ ನಾವೇ ಯತಿ;
ಇಲ್ಲವಾದಲ್ಲಿ ಯಾವಾಗಲೂ, ನರಳಬೇಕು ಅಸ್ವಸ್ಥನ ರೀತಿ.
ಉತ್ತಮ ಬಾಳಿನ ಏಳಿಗೆಗೆ,
ನಮಗೆ ಬೇಕು ನಿಸ್ವಾರ್ಥ ಮತಿ;
ಇಲ್ಲವಾದಲ್ಲಿ ನಮ್ಮ ಬದುಕಿಗೆ,
ನಾವೇ ಸಂಕಟದ ಭೀತಿ.
ಎಲ್ಲರಿಗೂ ನೆಮ್ಮದಿಯ,
ಬದುಕ ನೀಡುವುದು ನನಗೆ ಪ್ರೀತಿ;
ಕೆರೆಯ ಬೇಡ ನನ್ನೆದೆಯ,
ತುಮುಲದ ವಿಕಾರ ಆಕೃತಿ.
ವಿಷ ಕಕ್ಕುವ ಮಾತನ್ನು ಧಿಕ್ಕರಿಸಿ,
ದಕ್ಕುವುದು ನಿಮಗೆ ಸನ್ಮತಿ;
ಸುಧಾರಣೆಯಾಗದಿದ್ದರೆ ದೊರಕುವುದು,
ಭೂಮಿಯ ಮೇಲೆ ನರಕದ ಗತಿ.
ಸಕಲ ಅಣುಕಣ ಜೀವರಾಶಿಯ,
ಜೀವಕ್ಕೆ ಜವಾಬ್ದಾರಿಯ ಒಡತಿ;
ನಿಮ್ಮೆಲ್ಲರ ಕಾರ್ಯದಿಂದ,
ನನ್ನನ್ನು ಮಾಡಿ ಭಾಗ್ಯವತಿ.
ನಾನು ಹಡೆದವ್ವ.....
ಹೆಸರು ಪ್ರಕೃತಿ ಮಾತೆ....
- ವಿಭಾ ರಾಗೌ
You must be logged in to post a comment.